![]() |
| (Visual Representation) |
ಕಣ್ಣೂರು: ಇಲ್ಲಿನ ಪರಿಯಾರಂನ ಅಂಚರಕಂಡಿಯಲ್ಲಿ ಸೋಮವಾರ ನಸುಕಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ರಸ್ತೆಗೆ ಎಸೆದ ಎರಡು ಐಸ್ಕ್ರೀಂ ಬಾಂಬ್ಗಳು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸ್ಫೋಟಗೊಂಡವು. ಐಸ್ ಕ್ರೀಂ ಬಾಂಬ್ ಎನ್ನುವುದು ಐಸ್ ಕ್ರೀಮ್ ಆಕಾರದ ಕಂಟೇನರ್ ಬಳಸಿ ತಯಾರಿಸಿದ ಸ್ಫೋಟಕವಾಗಿದೆ. ದಾಳಿಕೋರರನ್ನು ಬಂಧಿಸಲು ತನಿಖೆ ನಡೆಯುತ್ತಿದೆ.
ಇಲ್ಲಿನ ದೇವಸ್ಥಾನವೊಂದರಲ್ಲಿ ಭಕ್ತರು ಅರ್ಪಿಸುವ ಕಾಣಿಕೆ ವಿಚಾರದಲ್ಲಿ ಸಿಪಿಎಂ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಸಂಘರ್ಷದ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿದೆ.
ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸ್ಫೋಟದ ಸ್ಥಳವು ಪೊಲೀಸ್ ಶಿಬಿರದಿಂದ ಕೆಲವು ಮೀಟರ್ ದೂರದಲ್ಲಿದೆ. ಸೋಮವಾರ ಚಕ್ಕರಕಲ್ ಪೊಲೀಸರು ಉಭಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲಿದ್ದಾರೆ.
