ಇಂದು 2/08/2024 ಬೆಳಗ್ಗೆ 8:15 ಮೇಲಂಗಡಿ ಪರಿಸರದ ನಿವಾಸಿ ಅಬ್ಬಾಸ್ ಮೇಲಂಗಡಿ ಯವರ ಮನೆಯ ಮೇಲ್ಛಾವಣಿ ಧಿಡೀರಣೆ ಕುಸಿದು ಬಿದ್ದು ಮನೆಮಂದಿ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. SDPI ರೆಸ್ಕ್ಯೂ ಟೀಂ ಸದಸ್ಯರಾದ ಎ.ಎಮ್.ರಹಮತ್, ದುರಂತಕ್ಕೀಡಾದ ಮನೆಯವರ ತಕ್ಷಣ ಕರೆಗೆ ಸ್ಪಂದಿಸಿ ಕಾರ್ಯ ಪ್ರವೃತರಾದರು. ಕೂಡಲೇ ಟೀಂ ಎಲ್ಲಾ ಸದಸ್ಯರು ಸ್ಥಳಕ್ಕೆ ಆಗಮಿಸಿ ಮನೆ ಮಂದಿಯನ್ನು ಮತ್ತು ಮನೆ ಸಾಮಾನುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದರು.ಕಾರ್ಯಾಚರಣೆಯಲ್ಲಿ SDPI ನಗರ ಸಮಿತಿ ಅಧ್ಯಕ್ಷರಾದ ಅಬುಬಕ್ಕರ್ ಉಳ್ಳಾಲ್, ಜೊತೆ ಕಾರ್ಯದರ್ಶಿ ಶಮೀರ್ ಝಬೈರ್, SDPI ಮೇಲಂಗಡಿ ಬ್ರಾಂಚ್ ನ ಅಧ್ಯಕ್ಷರಾದ ಮುಸ್ತಫಾ ಕೊಟ್ಟಾರ , SDPI ಬೊಟ್ಟು ಬ್ರಾಂಚ್ ಉಪಾಧ್ಯಕ್ಷರಾದ ಮನ್ಸೂರ್ ಬೊಟ್ಟು, SDPI ಮುಕ್ಕಚ್ಚೇರಿ ಬ್ರಾಂಚ್ ಕಾರ್ಯದರ್ಶಿ ಫಯಾಝ್ ಕೈಕೋ, ಕೋಡಿ ಬ್ರಾಂಚ್ ಅಧ್ಯಕ್ಷರಾದ ಹಾರಿಸ್ ಕೋಡಿ ಕಾರ್ಯಾಚರಣೆಯನ್ನು ಭಾಗಿಯಾಗಿದ್ದರು.
