![]() |
| ಸಂದರ್ಬಾ ಚಿತ್ರೆ |
ಬ್ರಹ್ಮಾವರ: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೈಕಾಡಿ ಗ್ರಾಮದ ಮಹಿಳೆಯೋರ್ವರ ಮೃತದೇಹವು ಜು.28ರಂದು ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಮೃತ ಮಹಿಳೆ ಬನ್ನಾಳದ ನಿವಾಸಿ ಸುರೇಂದ್ರ ಎಂಬವರ ಪತ್ನಿ ರೂಪಾ (57) ಎಂದು ತಿಳಿದು ಬಂದಿದೆ.
ಇವರು ಸುಮಾರು 7 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಜು.15ರಂದು ಸಂಜೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.
ಭಾನುವಾರ ಕೆರೆಯಲ್ಲಿ ಇವರ ಮೃತದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
~3.jpeg)