ವಾಲ್ಮೀಕಿ-ಮುಡಾ ಹಗರಣ: ಸದನದಲ್ಲಿ ಗಂಭೀರ ಚರ್ಚೆ ಮಾಡುತ್ತೇವೆ - ಆರ್. ಅಶೋಕ್

Image - original From The source


ವಾಲ್ಮೀಕಿ-ಮುಡಾ ಹಗರಣ: ಸದನದಲ್ಲಿ ಚರ್ಚೆಗೆ ಬಿಜೆಪಿ ಒತ್ತಾಯ


ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಸಲು ಬಿಜೆಪಿ ಒತ್ತಾಯಿಸಿದೆ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಈ ವಿಷಯದಲ್ಲಿ ನಿಲುವಳಿ ಸೂಚನೆ ಮಂಡಿಸುವುದಾಗಿ ತಿಳಿಸಿದ್ದಾರೆ.

ಇದನ್ನು ಓದಿ :- ಮುಡಾ ಅಕ್ರಮ: ಸಿಎಂ ಪತ್ನಿ ನಿವೇಶನದ ಬಗ್ಗೆ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗರಂ!

ಬಿಜೆಪಿ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ಜುಲೈ 15 ರಿಂದ ಆರಂಭವಾಗುವ ಅಧಿವೇಶನವನ್ನು ಇನ್ನೊಂದು ವಾರ ವಿಸ್ತರಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ, ರಾಜ್ಯದಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಅವರು ಆರೋಪಿಸಿದರು.


ಅಶೋಕ್ ಅವರ ಪ್ರಕಾರ, ಝೀಕಾ ಮತ್ತು ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಬೆಲೆ ಏರಿಕೆಯಿಂದ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ. ಇಲಾಖೆಗಳ ಅನುದಾನ ಕಡಿತಗೊಂಡಿದೆ ಮತ್ತು ಹಾಲು ಉತ್ಪಾದಕರಿಗೆ 700 ಕೋಟಿ ರೂಪಾಯಿ ಪ್ರೋತ್ಸಾಹ ಧನ ಬಾಕಿ ಉಳಿದಿದೆ.

ಇದನ್ನು ಓದಿ :- ಕೇಬಲ್ ಟಿವಿ ಗ್ರಾಹಕರಿಗೆ ದೊಡ್ಡ ಸಿಹಿ ಸುದ್ದಿ: ಹೆಚ್ಚು ಚಾನೆಲ್, ಕಡಿಮೆ ಬೆಲೆ!"

"ಒಂದೇ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ನೂರಕ್ಕೂ ಹೆಚ್ಚು ತಪ್ಪುಗಳನ್ನು ಮಾಡಿದೆ" ಎಂದು ಅಶೋಕ್ ಆರೋಪಿಸಿದರು.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×