ಕಲಬುರಗಿ: ಅಯೋಧ್ಯೆಯಲ್ಲಿ ಟಿಟಿ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು, ಯಾತ್ರೆ ಅಪಘಾತದಲ್ಲಿ ನಗರದ ಮೂವರು ನಿವಾಸಿಗಳು ಸಾವನ್ನಪ್ಪಿರುವ ಘಟನೆ ಅಯೋಧ್ಯೆಯಲ್ಲಿ ನಡೆದಿದೆ.
ಮೃತರನ್ನು ಕಲಬುರಗಿ ಮೂಲದ ಶಿವರಾಜ್, ಕಾಶಿನಾಥ್ ಮತ್ತು ತಂಗೆಮ್ಮ ಎಂದು ಗುರುತಿಸಲಾಗಿದೆ. ನಗರದ 22 ಮಂದಿ ಕುಟುಂಬ ಸಮೇತ ಯಾತ್ರೆಗೆ ತೆರಳಿದ್ದರು.
ವಿಶ್ವನಾಥನ ದರ್ಶನ ಪಡೆದು ಕಾಶಿ ಟಿಟಿಯಲ್ಲಿ ಅಯೋಧ್ಯೆಗೆ ಹೊರಟರು. ಈ ವೇಳೆ ಅಯೋಧ್ಯೆಯ ಪ್ರಯಾಗ್ರಾಜ್ ಹೆದ್ದಾರಿಯಲ್ಲಿ ಟ್ರಕ್ ಮತ್ತು ಟಿಟಿ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Tags:
Breaking
